ಬೆಂಗಳೂರು ಪ್ರೆಸ್ ಕ್ಲಬ್ ಪ್ರಕಾಶನ ಹೊರ ತರುತ್ತಿರುವ ಐವರು ಪತ್ರಕರ್ತರ ಪುಸ್ತಕಗಳ ಬಿಡುಗಡೆ ಸಮಾರಂಭ ಇಂದು ಸಂಜೆ ೬ಗಂಟೆಗೆ ನಡೆಯಲಿದೆ.
ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ ಪುಸ್ತಕ ಬಿಡುಗಡೆ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಸಾಹಿತಿ ಪುಸ್ತಕಮನೆ ಹರಿಹರಪ್ರಿಯ, ಗ್ರಂಥಾಲಯ ಇಲಾಖೆ ನಿರ್ದೇಶಕ ಶಿವಾನಂದ ಬಿ.ಹೊಂಡದ ಕೇರಿ ಭಾಗವಹಿಸಲಿದ್ದಾರೆ.
ಬಿಡುಗಡೆಯಾಗಲಿರುವ ಪುಸ್ತಕಗಳು
ಎನ್.ಅರ್ಜುನ್ದೇವ - ಸ್ಕೂಪು ತೋಪಾಯಿತು
ಲಕ್ಷ್ಮಣ್ ಕೊಡಸೆ-ಅಜಲು
ಗುಡಿಹಳ್ಳಿ ನಾಗರಾಜ್-ರಂಗಸೆಲೆ
ಪಿ.ಪುಟ್ಟಸೋಮಾರಾಧ್ಯ-ಅಕ್ಕ-ಮೀರಾ
ಎಸ್.ಸಿ.ದಿನೇಶ್ಕುಮಾರ್- ದೇಸಿಮಾತು
ಸಮಾರಂಭದ ಅಂಗವಾಗಿ ಉಡುಪಿ ಜಿಲ್ಲೆಯ ಶ್ರೀ ಮಹಾಗಣಪತಿ ಆರ್ಟ್ ಆಂಡ್ ಕಲ್ಚರಲ್ ಫೌಂಡೇಶನ್ ಯಕ್ಷಗಾನ ಮಂಡಳಿಯ ಕಲಾವಿದ ಗೋಪಾಲಕೃಷ್ಣಭಟ್ ಅವರ ಯಕ್ಷಗಾನ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.
ಅರ್ಬುದನ ಡೈರಿ – ಹೊಸ ಪುಸ್ತಕ
1 month ago

No comments:
Post a Comment